ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ವಾರ್ಡಿಗೆ ಮೂಲಭೂತ ಸೌಲಭ್ಯ ಹಾಗೂ ಕಂದಾಯ ಗ್ರಾಮ ಸೇರ್ಪಡೆಗೆ ಒತ್ತಾಯ.

ಗಂಗಾವತಿ. ಸಮೀಪದ ವಡ್ಡರ ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ವಾರ್ಡಿನಲ್ಲಿ ಸುಮಾರು ವರ್ಷಗಳಿಂದ ವಾಸವಾಗಿರುವ ಕುಟುಂಬಗಳಿಗೆ ಸರಿಯಾದ ರಸ್ತೆ ಶುದ್ಧವಾದ ಕುಡಿಯುವ ನೀರು ವಿದ್ಯುತ್ ದೀಪ ಒಳಚರಂಡಿ ಸೇರಿದಂತೆ ಪ್ರಮುಖ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ಅಲ್ಲಿ ವಾಸವಾಗಿರುವ 150ಕ್ಕೂ ಅಧಿಕ ಕುಟುಂಬಗಳಿಗೆ ಇದುವರೆಗೆ ಹಕ್ಕು ಪತ್ರ ಇಲ್ಲದೆ ಪ್ರಯುಕ್ತ ಅಂಬೇಡ್ಕರ್ ವಾರ್ಡಿನ ಸರ್ವೆ ನಂಬರ್ 54 ರಲ್ಲಿ 20 ಹಾಗೂ 25 ನೆಯ ಅಳತೆಯ ನಿವೇಶನವನ್ನು ಮಂಜೂರಾತಿಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ಯಮನೂರಪ್ಪ ಖಾಜಾಬೀ. ಅಲ್ಲಾಭಾಕ್ಷಿ ಅಬ್ದುಲ್ ಸತ್ತರ್ ಸೇರಿದಂತೆ ವಾರ್ಡಿನ ನಿವಾಸಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

