ಸ್ವಾಮಿ ವಿವೇಕಾನಂದರ ತತ್ವಾದರ್ಶ ಪಾಲಿಸಿ : ನಿವೃತ್ತ ಶಿಕ್ಷಕ ಫಣಿ ಸೋಮಪ್ಪ.

ಕಂಪ್ಲಿ : ಪಟ್ಟಣದ ಕೋಟೆಯಲ್ಲಿ ಸ್ವಾಮಿ ವಿವೇಕಾನಂದರ 1162ನೇ ಜಯಂತಿ ಕಾರ್ಯಕ್ರಮ ನಡೆಯಿತು.ನಿವೃತ್ತ ಶಿಕ್ಷಕ ಫಣಿ ಸೋಮಪ್ಪ ಚಾಲನೆ ನೀಡಿ ಮಾತನಾಡಿ, ‘ವಿವೇಕಾನಂದರ ಜಯಂತಿಯನ್ನು ದೇಶಾದ್ಯಂತ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅವರ ಆದರ್ಶಗಳನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಶಕ್ತಿ ದೇಶದ ಶಕ್ತಿ. ಬದಲಾವಣೆ ತರುವ ಸಾಮರ್ಥ್ಯ ಅವರಲ್ಲಿದೆ’ ಎಂದರು.ಮುಖ್ಯ ಶಿಕ್ಷಕಿ ಕೆ. ಶ್ವೇತಾ ಮಾತನಾಡಿ ಸ್ವಾಮಿ ಮೋಕ್ಷತಾನಂದ, ‘ವಿವೇಕಾನಂದರು ಸಾಕ್ಷಾತ್ ಶಿವನ ಸ್ವರೂಪವಾಗಿದ್ದರು. ಜಗತ್ತಿಗೆ ಜ್ಞಾನ ಕೊಡುವುದಕ್ಕಾಗಿಯೇ ಅವರು ಬಂದಿದ್ದರು’ ಎಂದು ಸ್ಮರಿಸಿದರು.ಮಕ್ಕಳಿಗೆ ಸ್ಪರ್ಧೆ: ಶಾಲಾ ವಿದ್ಯಾರ್ಥಿಗಳಿಗೆ ವೇಷ- ಭೂಷಣ, ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿ. ಜಿಲಾನ್, ಸಹ- ಶಿಕ್ಷಕರಾದ ಉಮಾ ಕೊಲ್ಕರ್, ವರ್ಷಾಮಜುಮದಾರ್, ಜೆ. ಅಕ್ಷತಾ, ಗೌಸಿಯ, ಸುನೀತಾ, ನಂದಿನಿ, ಕೊಲ್ಕರ್ ಜಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಹಾಜರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
