ಮಾದರಿಯಾದ ಸಹನಾಳ ಮದುವೆ ಶಾಸ್ತ್ರಅರಿಶಿಣ ಶಾಸ್ತ್ರದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ….

ಗಂಗಾವತಿ ಎ.27ಮದುವೆ ಸಂದರ್ಭಕ್ಕೂ ಮುಂಚೆ ನೆರವೇರಿಸಲಾಗುವ ಅರಿಶಿಣ ಶಾಸ್ತ್ರದಲ್ಲಿ (ಹಳದಿ ಕಾರ್ಯಕ್ರಮ) ವಧುವೊಬ್ಬರು ತನ್ನ ವೈಯಕ್ತಿಕ ಕಾರ್ಯ ಕ್ರಮದಲ್ಲಿಯೂ ಹತ್ತನೇ ತರಗತಿ ಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿ ಬಂದ ಮಕ್ಕಳನ್ನು ಸನ್ಮಾನಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.ಬಸವೇಶ್ವರ ಆಯಿಲ್ ಮಿಲ್ ಇಲ್ಲಿನ ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ (ಇಸ್ಲಾಂಪುರ) ಸಮೀಪದ ನಿವಾಸಿ ಉದ್ಯಮಿ ಚಂದ್ರಶೇಖರ್ ಅಕ್ಕಿ ಅವರ ಪುತ್ರಿ ಸಹನಾಳ (ಹಿರಿಯ ಉದ್ಯಮಿ ಅಕ್ಕಿ ಕೊಟ್ರಪ್ಪ ಅವರ ಮೊಮ್ಮಗಳು) ಮದುವೆ ಎ.29ರಂದು ಕಾರಟಗಿಯಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹರಿಶಿಣ ಶಾಸ್ತ್ರದಲ್ಲಿ ಸನ್ಮಾನಿಸುತ್ತಿರುವುದುನಿಗಧಿಯಾಗಿದೆ. ಇದಕ್ಕೂ ಪೂರ್ವದಲ್ಲಿ ಭಾನುವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಹಮ್ಮಿಕೊಳ್ಳಲಾಗಿತ್ತು. ವಧು ಸಹನಾಳ ಅಪೇಕ್ಷೆಯಂತೆ ಪ್ರಸಕ್ತ ಸಾಲಿನ ಹತ್ತನೇ ತರಗತಿ ಅಮ್ಮ ರೆಸಿಡೆನ್ಸಿಯಲ್ಲಿ ಪರೀಕ್ಷೆಯಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕಪಡೆದ ಮೊದಲ ಮೂರು ಸ್ಥಾನದಲ್ಲಿರುವ ಮಕ್ಕಳನ್ನು ಕರೆದು ಸನ್ಮಾನಿಸಿ ಪ್ರೋತ್ಸಾಹಿ ಸುವ ಇಚ್ಛೆ ವ್ಯಕ್ತಪಡಿಸಿದರು.ಮಕ್ಕಳಿಗೆ ಸನ್ಮಾನ:ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಪ್ರೋತ್ಸಾಹ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಶಾಸಕ ಎಚ್.ಆರ್. ಶ್ರೀನಾಥ್, ಮದುವೆಯಂತ ವೈಯಕ್ತಿಕ ಕಾರ್ಯಕ್ರಮದಲ್ಲೂ ಹೆಚ್ಚು ಅಂಕ ಪಡೆದ ಅದೂ ಸರ್ಕಾರಿ ಶಾಲೆಯ ಮಕ್ಕಳನ್ನು ಗುರುತಿಸಿ ಸನ್ಮಾನಿಸುವುದು ಸಮಾಜಕ್ಕೆ ಮಾದರಿ ಕಾರ್ಯವಾಗಿದೆ ಎಂದು ಪ್ರಶಂಸಿದರು.ಅಂಕಪಡೆದ ಅದೂ ಸರ್ಕಾರಿ ಶಾಲಾ ಮಕ್ಕಳಾದ ಕನಕಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಗರಾಜ್ 621 ಅಂಕ (625ಕ್ಕೆ), ಪ್ರತಿಭಾ 619 ಹಾಗೂ ನಂದಿನಿ 617ಅಂಕ ಪಡೆದ ಮಕ್ಕಳನ್ನು ವೇದಿಕೆಯಲ್ಲಿ ಕರೆದು ಸನ್ಮಾನಿಸಿ ಪುಸ್ತಕ ಹಾಗೂ ನಗದುಈ ಸಂದರ್ಭದಲ್ಲಿ ಸಹಕಾರ ಭಾರತಿಯ ರಾಷ್ಟ್ರೀಯ ಮಟ್ಟದ ಹಿರಿಯ ಸದಸ್ಯ ರಮೇಶ ವೈದ್ಯ, ಅಕ್ಕಿಕೊಟ್ರಪ್ಪ, ಚಂದ್ರಶೇಖರ್ ಅಕ್ಕಿ, ಆನಂದ್ ಅಕ್ಕಿ, ಪ್ರಕಾಶ್, ವಾಸು ಬಜಾಜ್, ರಮೇಶ ಗೌಳಿ, ಸುರೇಶ ಗೌರಪ್ಪ, ಮಕ್ಕಳ ಹಾಗೂ ಪಾಲಕರು ಹಾಜರಿದ್ದರು.
