ಶ್ರೀ ಪಕೀರಪ್ಪ ತಾತನವರ ಸಾನಿಧ್ಯದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಹೆಬ್ಬಾಳ ಬೃಹನ್ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ..


ವೈಭವದಿಂದ ನಡೆದ ಒಂದು ಶ್ರೀ ವಂಕಲ ಕುಂಟ ಮಾರುತೇಶ್ವರ ಜಾತ್ರಾ ಮಹೋತ್ಸವ..

ಗಂಗಾವತಿ ತಾಲೂಕಿನ ಮಲ್ಲಾಪುರ ಸೀಮಾ ವ್ಯಾಪ್ತಿಯ ಶ್ರೀ ವಾ ನಭದ್ರೇಶ್ವರ ದೇವಸ್ಥಾನದ ಪರಿಸರದಲ್ಲಿರುವ ಶ್ರೀವಂಕಲಕುಂಟ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಮತ್ತು ವೈಭವದಿಂದ ನಡೆಯಿತು ದೇವಸ್ಥಾನದ ಮುಖ್ಯಸ್ಥರಾಗಿರುವ ಶ್ರೀ ಪಕೀರಪ್ಪ ತಾತನವರ ಸಾನಿಧ್ಯದಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಹೆಬ್ಬಾಳ ಬೃಹನ್ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು ಜಾತ್ರಾ ಮಹೋತ್ಸವದಲ್ಲಿ ವಾಸ್ತು ತಜ್ಞರಾಗಿರುವ ಡಾ. ಮಂಜುನಾಥ ಕುರುಗೋಡ ರಂಗ ಕಲಾವಿದರಾದ ಭೀಮರಾಯ ಸಿಂಗಾಪುರ ಹೇಮಂತ ತಳಕಲ್ ಪತ್ರಕರ್ತ ಪಿ ದಶರಥ,ಮಲ್ಲಾಪುರ ಬಸಾಪಟ್ಟಣ ಸಿದ್ದಿಕೇರಿ ಗಂಗಾವತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡಿದ್ದರು ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದಿದ್ದು ಮಲ್ಲಾಪುರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದಾನಿಗಳು ರೈತರು ಭಕ್ತಾದಿಗಳು ಸಹಾಯ ಸಹಕಾರ ನೀಡುವಂತೆ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಫಕೀರೇಶ್ವರ ತಾತನವರು ಮನವಿ ಮಾಡಿದ್ದಾರೆ,,, ಮಾಹಿತಿಗಾಗಿ 9342270408

