ವಟಗಲ್ ಇಂದಿರಾಗಾಂಧಿ ವಸತಿ ಶಾಲೆಗೆ ನೀರೊದಗಿಸಲು ಬೇಡರ ಸಮಿತಿ ಯಿಂದ ಮನವಿ..

ವಟಗಲ್ ಇಂದಿರಾಗಾಂಧಿ ವಸತಿ ಶಾಲೆಗೆ ನೀರೊದಗಿಸಲು ಬೇಡರ ಸಮಿತಿ ಯಿಂದ ಮನವಿ..

ಬೆಂಗಳೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶಾಲೆ ಸಂಖ್ಯೆ 647 ಇಂದಿರಾಗಾಂಧಿ ವಸತಿ ಶಾಲೆ ಬಾಲಕ ಬಾಲಕಿಯರ ಪರಿಶಿಷ್ಟ ಪಂಗಡ ವಟಗಲ್ ಶಾಲೆಯಲ್ಲಿ 250 ವಿಧ್ಯಾರ್ಥಿಗಳಿದ್ದು ಈ ಮಕ್ಕಳಿಗೆ ನೀರಿನ ತೊಂದರೆಯನ್ನು ಖುದ್ದಾಗಿ ಬೇಡರ ಸಮಿತಿಯ ಪದಾಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ಪ್ರಾಂಶುಪಾಲರು ನೀರಿನ ಸಮಸ್ಯೆಯ ಬಗ್ಗೆ ಪದಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಾಗ ಖುದ್ದಾಗಿ ರಾಜ್ಯಾಧ್ಯಕ್ಷರು ಈ ಸಮಸ್ಯೆಯನ್ನು ಪರಿಹರಿಸಲು ಗ್ರಾಮಸ್ಥರ ಜೊತೆ ಸಮಿತಿ ಪದಾಧಿಕಾರಿಗಳು ಇಂದು ಬೆಂಗಳೂರಿನ ಸಚಿವರ ಕಾರ್ಯಲಯದಲ್ಲಿ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು ಆಗ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು ಇ ಸಂದರ್ಭದಲ್ಲಿ ಸಮಿತಿ ರಾಜ್ಯಾಧ್ಯಕ್ಷರಾದ ಅಂಬಣ್ಣ ನಾಯಕ ಗುಜ್ಜಲ್ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಜೆಲ್ಲಿ ಆಂಜನೇಯ್ಯ ನೀರಮಾನ್ವಿ ವಟಗಲ್ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *