ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಗೆ ಎಸ್ಪಿಗಳು ಕಡ್ಡಾಯ ಸಭೆಗೆ ಹಾಜಾರಾಗಿ, ಹಾಜರಾದ ಬಗ್ಗೆ ಕಚೇರಿಗೆ ಪಾಲನಾ ವರದಿ ನೀಡುವಂತೆ ಡಿಜಿಪಿ ರಿಂದ ಕಟ್ಟುನಿಟ್ಟಿನ ಆದೇಶ!

ಬೆಂಗಳೂರು… ರಾಜ್ಯದ್ಯಂತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ. ಅತ್ಯಾಚಾರ ಅನಾಚಾರ ಮೋಸ ವಂಚನೆ. ಸೇರಿದಂತೆ ಅಸ್ಪೃಶ್ಯತೆ ಆಚರಣೆ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವ್ಯಾಪ್ತಿಯ ಪೊಲೀಸ್ ಇಲಾಖೆಗಳಲ್ಲಿ ದೂರು ದಾಖಲಾಗಿದ್ದ ಸಂದರ್ಭದಲ್ಲಿ ಇಂತಹ ಪ್ರಕರಣಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳು. ಪ್ರಕರಣಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ಎಸ್ಸಿ ಎಸ್ಟಿ ದೌರ್ಜನ್ಯ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಗೆ ಖುದ್ದಾಗಿ ಹಾಜರಾತಿಯಾಗಿ ಹಾಜಾರಾದ ಬಗ್ಗೆ ಕಚೇರಿಗೆ ಪಾಲನ ವರದಿ ನೀಡುವಂತೆ ಡಿ ಜೆಪಿ ಅವರಿಂದ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು ಪಾಲನಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಲಕ್ಷ ಧೋರಣೆ ಅನುಸರಿಸದೇ ಸಭೆಗೆ ಹಾಜರಾಗಬೇಕೆಂದು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

–ಮೋಹನ್ ಕುಮಾರ್ ದಾನಪ್ಪ,
ಸದಸ್ಯರು,ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
