ಮರಳಿ ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನದ ಬಳಿ ಸಂಭ್ರಮದ ಗಣೇಶ ಪ್ರತಿಷ್ಠಾಪನೆ..
ಗಂಗಾವತಿ:* ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಇಂದು ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.ಪುರೋಹಿತರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಗ್ರಾಮಸ್ಥರು ಭಕ್ತಿ ಭಾವದಿಂದ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ವಸಂತ್ ಕುಮಾರ್ ಹಾದಿಮನಿ, ರಮೇಶ್ ನಾಯಕ್ ಮರಳಿ, ಹೊನ್ನೂರು ಸ್ವಾಮಿ, ಖಾಜಾಸಾಬ್, ಪ್ರವೀಣ್ ಕುಮಾರ್ ಕೆ., ವೇದವತಿ ಹಾದಿಮನಿ, ಜ್ಯೋತಿ ನಾಯಕ್, ವಂಜಾಕ್ಷಮ್ಮ ಹಾದಿಮನಿ, ಲಕ್ಷ್ಮಿ ಕಲ್ಗುಡಿ, ಪಲ್ಲವಿ, ಸೋನಿ, ಗಂಗಮ್ಮ ಜಂಗ್ಲಿ, ಭೂಮಿಕಾ, ನಿಕಿತಾ, ಖುಷಿ ಸೇರಿದಂತೆ ಗ್ರಾಮದ ಹಲವು ಭಕ್ತರು ಉಪಸ್ಥಿತರಿದ್ದರು.

