ವಾಣಿಜ್ಯ ಸಂಕೀರಣ ಹಾಗೂ ಶ್ರೀ ವಾಸವಿ ಹೋಮ ಸಂಪನ್ನ….

ವಾಣಿಜ್ಯ ಸಂಕೀರಣ ಹಾಗೂ ಶ್ರೀ ವಾಸವಿ ಹೋಮ ಸಂಪನ್ನ….


ಗಂಗಾವತಿ. ನಗರದ ಆರ್ಯವೈಶ್ಯ ಸಮಾಜ ಬಾಂಧವರ ಶ್ರೀ ಕನ್ನಿಕಾ ಪರಮೇಶ್ವರಿ ಶರನ್ನ್ ವ ರಾತ್ರಿ ಪ್ರಯುಕ್ತ ಶ್ರೀ ದುರ್ಗಾಷ್ಟಮಿ ದಿನವಾದ ಮಂಗಳವಾರದಂದುನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಹಾಗೂ ಶ್ರೀ ವಾಸವಿ ಹೋಮ ಪೂರ್ಣಾಹುತಿ ಯೊಂದಿಗೆ ಮಂಗಳವಾರದಂದು ಸಂಪನ್ನಗೊಂಡಿತು.


ಬೆಳಿಗ್ಗೆ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯಚೂರು ಅವರು ಪೂರ್ಣ ಕುಂಭದೊಂದಿಗೆ ಸಮಸ್ತ ಆರ್ಯವೈಶ್ಯ ಸಮಾಜ ಹಾಗೂ ಆರ್ಯವೈಶ್ಯ ಸಮಾಜ ಕಾರ್ಯ ಕಾರುಣಿ ಮಂಡಳಿಯ ಸದಸ್ಯರು. ಸಂಕೀರ್ಣದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಶ್ರೀ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ವೇದಮೂರ್ತಿ ಪಂಡಿತ್ ಸುಬ್ರಹ್ಮಣ್ಯ ಹಾಗೂ ನಾಗರತ್ನ ಅವರು ವಾಸವಿ ಹೋಮದ ನೇತ್ರತ್ವವನ್ನು ವಹಿಸಿ ಅಧ್ಯಕ್ಷ ದಂಪತಿಗಳು ಸೇರಿದಂತೆ ಕಾರ್ಯದರ್ಶಿಗಳಾದ ಈಶ್ವರ ಶೆಟ್ಟಿ ದಂಪತಿಗಳು ಹಾಗೂ ಕಾರ್ಯಕಾರಣಿ ಸಮಿತಿಯ ದಂಪತಿಗಳಿಂದ ಪೂರ್ಣಾಹುತಿ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಕುಮಾರಿಕಾ ಪೂಜಾ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉಪಾಧ್ಯಕ್ಷ ಸುರೇಶ್. ಶೆಟ್ಟಿ. ಭಾಗ್ಯ ಈಶ್ವರ ಶೆಟ್ಟಿ. ಪ್ರಸಾದ ಪಾನ ಗಂಟೆ. ಮಂಜುನಾಥ್ ಮಾರುತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *