29ನೆಯ ರಾಜ್ಯ ಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಜಾಂಬು ರೇಟ್ಸ್. ಗೆ ರಾಜ್ಯ ಉಪಾಧ್ಯಕ್ಷ ಹೆಚ್ ಎಂ ಸಿದ್ದರಾಮಯ್ಯ ಸ್ವಾಮಿ ಚಾಲನೆ….

ಗಂಗಾವತಿ.. 27ರಿಂದ ದಿನಾಂಕ ಒಂದರವರಿಗೆ ಬೆಳಗಾವಿ ಜಿಲ್ಲೆಯ ಹೊನಗ ಫೀನಿಕ್ಸ್ ಶಾಲೆಯ ಆವರಣದಲ್ಲಿ ಜರುಗಲಿರುವ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮಟ್ಟದ ಜಾಂಬು ರೇಟ್ ಕಾರ್ಯಕ್ರಮಕ್ಕೆ ರಾಜ್ಯ ಉಪಾಧ್ಯಕ್ಷ ಎಚ್ಎಮ್ ಸಿದ್ದರಾಮ ಸ್ವಾಮಿ ಶುಕ್ರವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಸ್ತು ಧೈರ್ಯ ಸಾಹಸ ಪ್ರವೃತ್ತಿಯನ್ನು ಶಿಕ್ಷಣದ ಜೊತೆಗೆ ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಮಟ್ಟದ ಜಾಂಬುರೇಟ ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ 230 ಅಧಿಕ ಭಾಗವಹಿಸುತ್ತಿದ್ದು ಇವರೊಂದಿಗೆ ತಾವು ಸೇರಿದಂತೆ ಆಯಾ ಶಾಲೆಯ ದೈಹಿಕ ಶಿಕ್ಷಕರು ಭಾಗವಹಿಸುವುದರ ಮೂಲಕ ಯಾವುದೇ ಅ ಹಿ ತಕರ ಘಟನೆ ಜರುಗದಂತೆ ಅತ್ಯಂತ ಜವಾಬ್ದಾರಿಯಿಂದ ಹೋಗಿ ಬರಲಾಗುತ್ತದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಪಾಲಕರಿಗೆ ಭರವಸೆಯ ಮೂಲಕ ಧೈರ್ಯವನ್ನು ತುಂಬಿದರು. ಎಂಎಸ್ ಎಂಎಸ್ ಕಾಲೇಜಿನ ಆಡಳಿತ ಅಧಿಕಾರಿ ಮೂರ್ತಿ ವಿರುಪಾಕ್ಷಯ್ಯ ಸ್ವಾಮಿ ಹಾಗೂ ಸಿಪಿಎಸ್ ಶಾಲೆಯ ಹುಸೇನ್ ಸಾಬ್. ಉಪಸ್ಥಿತರಿದ್ದರು.

