*ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ,,! ಶಿಕ್ಷಕ ಮಲ್ಲೇಶಪ್ಪ ಭಾಜನ ಅಭಿನಂದನೆ,,*

ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ,,! ಶಿಕ್ಷಕ ಮಲ್ಲೇಶಪ್ಪ ಭಾಜನ ಅಭಿನಂದನೆ,,

ಗಂಗಾವತಿ :04 ಒಬ್ಬ ಶಿಕ್ಷಕನಿಗೆ ಯಾವದೇ ಪ್ರಶಸ್ತಿಗಳು ಅರಸಿ ಬರಬೇಕಾದರೇ ಸಮಾಜದಲ್ಲಿ ಅವರ ಕಾರ್ಯ ವೈಖರಿ ಹಾಗೂ ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವವವನ್ನು ಗುರುತಿಸಿ ಗೌರವ ಹಾಗೂ ಪ್ರಶಸ್ತಿಗಳು ಲಭಿಸುತ್ತವೆ ಎಂದು ಶ್ರೀ ರಾಜೇಶ್ವರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿ.ಸಣ್ಣಪ್ಪ ಹೇಳಿದರು.ಅವರು ಬಸಾಪಟ್ಟಣದ ಶ್ರೀ ರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲೇಶಪ್ಪ ಬೆಂಕಿ ಗೊಂಡಬಾಳ ಇವರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ ಶಿಕ್ಷಕ ಮಲ್ಲೇಶಪ್ಪ ಅವರಿಗೆ ಅಭಿನಂದನೆ ತಿಳಿಸಿ ಮಾತನಾಡಿದರು.ಹಾಗೂ ಇನ್ನೂಳಿದಂತೆಕೆ.ಪಿ.ಸಿ.ಸಿ ಶಿಕ್ಷಕರ ಘಟಕದಬಸವರಾಜ ಗುರಿಕಾರ, ಕಾರ್ಯದರ್ಶಿ ರುದ್ರೇಶಪ್ಪ ಡ್ಯಾಗಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಗುರುಗಳಾದ ನಿಂಗಪ್ಪ ಗುಂಡೂರ ಶಿಕ್ಷಕರಾದ ಪ್ರವೀಣ್ ಕುಮಾರ್ ಶ್ರೀಮತಿ ಲಕ್ಷ್ಮಿ, ಹನುಮೇಶ್ ಬಿಂಗಿ, ರಾಘವೇಂದ್ರ ರೆಡ್ಡಿ, ನಾಗಭೂಷಣ್, ಶಂಕ್ರಪ್ಪ, ಮಹಮದ್ ಹನೀಫ್, ಭರತ ಜಗದೀಶ, ರತ್ನ ಶ್ರೀಮತಿ ಮಂಜುಳಾ, ಶ್ರೀಮತಿ ಕವಿತಾ ಶ್ರೀಮತಿ ಜ್ಯೋತಿ ಸೇರಿದಂತೆ ಶಿಕ್ಷಕರ ಬಳಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

