ಕಂಪ್ಲಿ ಪುರಸಭೆ ನಿಗಧಿ ಪಡಿಸಿದ ಮಾರುಕಟ್ಟೆಯಲ್ಲೇ ಮೀನು ಮಾರಾಟ ಮಾಡಬೇಕು…

ಬಳ್ಳಾರಿ / ಕಂಪ್ಲಿ- : ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಮೀನುಗಳನ್ನು ಮಾರಾಟ ಮಡದೇ, ಕಂಪ್ಲಿ ಪುರಸಭೆಯವರು ನಿಗಧಿ ಪಡಿಸಿದ ಮಾರುಕಟ್ಟೆಯಲ್ಲಿಯೇ ಮೀನುಗಳನ್ನು ಮಾರಾಟ ಮಾಡಬೇಕೆಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ ಹೇಳಿದರು.ಪಟ್ಟಣದ ಕೋಟೆ ಪ್ರದೇಶದ ಅವರು ತುಂಗಭದ್ರಾ ನದಿ ತೀರಕ್ಕೆ ಭೇಟಿ ನೀಡಿ ಮೀನು ಮಾರಾಟಗಾರರೊಂದಿಗೆ ಮಾತನಾಡಿ ರಸ್ತೆ ಬದಿಯಲ್ಲಿ ಸರ್ವಜನಿಕ ಸ್ಥಳಗಳಲ್ಲಿ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮೀನಿನ ಕಸ, ಧೂಳು ಹರಡುತ್ತದೆ. ಕಟ್ಟು ಮಾಡಿದ ಮೀನಿನ ತ್ಯಾಜ್ಯದಿಂದ ಅಕ್ಕಪಕ್ಕದ ಪರಿಸರವೂ ಹಾಳಾಗುತ್ತದೆ. ಶುದ್ಧ ಪರಿಸರದಲ್ಲಿ ಕೋಳಿ ಮಾಂಸ, ಮಟನ್ ಜತೆ ಮೀನು ಮಾರಾಟ ಮಾಡುವಂತೆ ಸಲಹೆ ನೀಡಿದರು.ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಚಿನ್ನರಾಜು ಮತ್ತು ಮೀನುಗಾರರು ಮಾತನಾಡಿ ಮೀನು ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಮಾತನಾಡಿ ಪುರಸಭೆ ಈಗಾಗಲೇ ದಿನವಹಿ ಮಾರುಕಟ್ಟೆ ಪ್ರದೇಶದಲ್ಲಿ ಕೋಳಿ,ಕುರಿ ಸೇರಿದಂತೆ ಇತರೆ ಮಾಂಸ ಮಾರಾಟಕ್ಕೆ ಕಮೇಲಾ ಪ್ರದೇಶವನ್ನು ನಿಗಧಿ ಪಡಿಸಲಾಗಿದೆ. ಅಲ್ಲಿಯೇ ಮೀನು ಮಾರಾಟಗಾರರಿಗೆ ಮೀನು ಮಾರಾಟ ಮಾಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಮೀನುಗಾರರ ಸಹಕಾರ ಸಂಘದ ಉಪಾಧ್ಯಕ್ಷ ರಾಜಶೇಖರ್, ಮೀನುಗಾರರಾದ ನಾಗೇಶ್, ಮಾದೇಶ್, ಅಶೋಕ್ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್ 9741845277
