ಶ್ರೀ ಗಣೇಶ ಸುಭ್ರಮಣ್ಯ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ…

ಶ್ರೀ ಗಣೇಶ ಸುಭ್ರಮಣ್ಯ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ…

ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಅಯ್ಯಪ್ಪ ದೇವಸ್ಥಾನ ಸಮಿತಿ ಟ್ರಸ್ಟವತಿಯಿಂದ ಸೋಮವಾರ ಬ್ರಾಹ್ಮಿ ಮೂರ್ಹುತದಲ್ಲಿ ಶ್ರೀಗಣೇಶ ಸುಭ್ರಮಣ್ಯ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಜರುಗಿತು.ಮೂರ್ತಿ ಪ್ರತಿಷ್ಟಾಪನೆಯಲ್ಲಿ ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಚಾರ್ಯ ಮಹಾಸ್ವಾಮಿ ದಿವ್ಯಾ ಸಾನಿದ್ಯವಹಿಸಿದ್ದರು. ನಂತರ ಮಾತನಾಡಿ ಪ್ರತಿಯೊಬ್ಬರು ದೇವರನ್ನು ಶ್ರದ್ದೆ ಭಕ್ತಿಯಿಂದ ಪೂಜಿಸುವುದರ ಜೊತೆಗೆ ಆರೋಗ್ಯ ನೆಮ್ಮದಿ ಸಕಲ ಕಾರ್ಯಗಳು ಸಿದ್ದಿಯಾಗುತ್ತವೇ ಎಂದರು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು ಜೊತೆಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಕಂಪ್ಲಿ ಪ್ರಭುಸ್ವಾಮಿ ಕಲ್ಮಠದ ಅಧ್ಯಕ್ಷ ರಾಮಸಾಗರ ಹೆಚ್. ಶಿವಶಂಕರ ಗೌಡ್ರು, ಗ್ರಾ.ಪಂ ಅಧ್ಯಕ್ಷೆ ಆಶಾ, ಗ್ರಾ.ಪಂ ಪಿಡಿಓ ಮಲ್ಲಿಕಾರ್ಜುನ, ತಾ.ಪಂ ಮಾಜಿ ಸದಸ್ಯ ಜಗದೀಶ ಗೌಡ್ರು, ರಾಮಸಾಗರ ಅಯ್ಯಪ್ಪ ದೇವಸ್ಥಾನ ಸಮಿತಿ ಟ್ರಸ್ಟ ಅಧ್ಯಕ್ಷ ಬೋವೇರ್ ನಾರಾಯಣ ಸ್ವಾಮಿ, ಗೌರವ ಅಧ್ಯಕ್ಷರಾದ ಬಾರಕೀರ ಶಿವಪ್ಪ, ಪೋಸ್ಟ ಶಿವಪ್ಪ ಗುರುಸ್ವಾಮಿ, ಉಪಾಧ್ಯಕ್ಷ ಜಗನ್ನಾಥ ಗೌಡ್ರು, ಕಾರ್ಯದರ್ಶಿ ಬೋವೇರ್ ಮಂಜುನಾಥ, ಗುರುಸ್ವಾಮಿಗಳಾದ ಹೆಚ್. ಅಮರೇಶ, ಬಿ. ಪ್ರಕಾಶ, ಅಯ್ಯಣ್ಣ, ಕಂಪ್ಲಿ ಯರ‍್ರೀಸ್ವಾಮಿ, ಪಿ. ಬಸವರಾಜ, ವಿಜಯ ಭಾಸ್ಕರ, ಪಲ್ಲೆದ ಮಂಜುನಾಥ, ಡ್ರೆವರ್ ಮಲ್ಲಿ, ಕಿರಣ ಶೆಟ್ಟಿ ಸೇರಿದಂತೆ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಮತ್ತು ಸಕಲ ಭಕ್ತಾಧಿಗಳಿದ್ದರು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *