ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ… ಎಸ್ ವಿ ಪಾಟೀಲ್ ಗುಂಡೂರ.

ಗಂಗಾವತಿ. ಬರೆದದ್ದು ಗೀಚಿದ್ದು ಕವನವಲ್ಲ ಒಬ್ಬ ಉತ್ತಮ ಕವಿಯಾಗಲು ಹೆಚ್ಚು ಅಧ್ಯಯನ ಶೀಲತೆಯನ್ನು ಹಾಗೂ ಜೀವನದ ಅನುಭವಗಳನ್ನು ಹಂಚಿಕೊಂಡಾಗ ಮಾತ್ರ ಅತ್ಯುತ್ತಮವಾದ ಕವಿಯಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ಸಾಹಿತ್ಯ ಹಾಗೂ ನಾಟಕ ರಚನೆಕಾರ ಎಸ್ ವಿ ಪಾಟೀಲ್ ಗುಂಡೂರ್ ಹೇಳಿದರು. ಅವರು ಶನಿವಾರದಂದು ಕನ್ನಡ ಜಾಗೃತಿ ಭವನ ದಲ್ಲಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಶ್ರೀ ರಾಜರಾಜೇಶ್ವರಿ ಜನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಅರಳಹಳ್ಳಿ ಇವರ ನೇತೃತ್ವದಲ್ಲಿ ಆಯೋಜಿಸಿದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭತ್ತದ ಕಣಜ ಎನಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರ ಭಾಗದಲ್ಲಿ ದಿನದಿಂದ ದಿನಕ್ಕೆ ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಶಂಶಿಯ ಕಾರ್ಯವಾಗಿದೆ. ಕವಿಗೋಷ್ಠಿಯಲ್ಲಿ ಸುಮಾರು 24 ಅಧಿಕ ಕವಿಗಳು ತಮ್ಮದೇ ಆದಂತಹ ಕವನಗಳನ್ನು ರಚಿಸಿ ವಾಚನ ಮಾಡಿರುವುದು ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಕವಿಗಳು ಸ್ವಲ್ಪ ಪ್ರಾಸಗಳನ್ನು ರಚಿಸಲು ಹೋಗಿ ತ್ರಾಸು ಅನುಭವಿಸಿದ್ದು ಕಾಣಬಹುದಾಗಿದೆ ಉಳಿದಂತೆ ಕವನಗಳನ್ನು ಗಮನಿಸಿದಾಗ ನೋವು ನಲಿವು ಪ್ರೀತಿ ಭಾಷಾಭಿಮಾನ ಇತರೆ ಅಂಶಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್. ಪಂಪಣ್ಣ ನಾಯಕ್. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ವೆಂಕಟೇಶ್ ದರೋಜಿ ಎಸ್ ಬಿ ಹಿರೇಮಠ್ kfಮುದ್ದಾಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತಡವಾಗಿ ಆಗಮಿಸಿದ ಬಿಚಿ. ಬಿ ಪ್ರಾಣೇಶ್ ಹಾಸ್ಯ ಚಟಾಕಿಗಳನ್ನು ಹಾರಿಸಿದರು ತಾಲೂಕ ಅಧ್ಯಕ್ಷ ಅಶೋಕ ಗುಡಿ ಕೋಟೆ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ರುದ್ರಪ್ಪ ಭಂಡಾರಿ ಜಿಲ್ಲಾಧ್ಯಕ್ಷರು ವಹಿಸಿದ್ದರು ದಿವ್ಯ ಸಾನಿಧ್ಯವನ್ನು ಅರಳಿಹಳ್ಳಿ ಶರಣಬಸವ ದೇವರು ಮಹಾಸ್ವಾಮಿಗಳು ವಹಿಸಿದ್ದರು…

