ಹೆಚ್. ಎನ್. ಪ್ರಶಸ್ತಿ ಪುರಸ್ಕೃತರಾದ ಜಗನ್ನಾಥ ಆಲಂಪಲ್ಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸನ್ಮಾನ…

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ಯಾದಗಿರಿಯಲ್ಲಿ ನೀಡಲಾದ ರಾಜ್ಯ ಮಟ್ಟದ ಹೆಚ್. ಎನ್ ಪ್ರಶಸ್ತಿಗೆ ಭಾಜಾನರಾದ ಲಿಟಲ್ ಹಾರ್ಟ್ಸ್ ಸ್ಕೂಲ್ ನ ಕಾರ್ಯದರ್ಶಿಗಳು ಹಾಗೂ ಗಂಗಾವತಿ ತಾಲೂಕಾ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಜಗನ್ನಾಥ ಆಲಂಪಲ್ಲಿ ಇವರಿಗೆ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ನಟೇಶ್. ಬಿ. ಹಾಗೂ ಕಾರ್ಯಲಯದ ಸಿಬ್ಬಂದಿ ಈ ದಿನ ಸನ್ಮಾನ ಮಾಡಿ ಶುಭಾಶಯಗಳನ್ನು ಕೋರಿದರು.ಈ ಸಂಧರ್ಭದಲ್ಲಿ ಇಲಾಖೆಯ ವ್ಯವಸ್ಥಾಪಕರಾದ ಶ್ರೀ ಶಿವಪ್ರಸಾದ,ECO ಶ್ರೀ ರಾಘವೇಂದ್ರ, TPEO ಶ್ರೀಮತಿ ಸರಸ್ವತಿ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀ ಹೇಮಂತರಾಜ್, ಶ್ರೀ ನಿರೂಪಾದಿಗೌಡ, ಲಿಂಗಾರೆಡ್ಡಿ ಆಲೂರ್, ರೂಬಿನ್ ಮೀರಾಜಕರ್, ನಾಗರಾಜ್ ಹಿರೇಮಠ್, ಶ್ರೀ ಇಸ್ಮಾಯಿಲ್, ಶ್ರೀ ನೂರ್ ಮಹಮ್ಮದ್ ಗುತ್ತಿ, ಜುನೈದ್ ಅಖ್ತರ್ ಹಾಗೂ ಶಿವಕುಮಾರ್ ಉಪಸ್ಥಿತರಿದ್ದರು.ಧನ್ಯವಾದಗಳು ಜಗನ್ನಾಥ ಆಲಂಪಲ್ಲಿ.

