ಹೊಸ ದರೋಜಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ನೂತನ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ…

ಹೊಸ ದರೋಜಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ನೂತನ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ…

ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ಶ್ರೀಧರ್ಮ ಶಾಸ್ತ್ರ ಅಯ್ಯಪ್ಪ ಸೇವಾ ಸಮಿತಿವತಿಯಿಂದ ಶ್ರೀ ಕರೂರು ವಾದಿರಾಜ ಆಚಾರ್ ಪಂಚಾಗ ಕರ್ತರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ನೂತನ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಶುಭ ಶುಕ್ರವಾರಂದು ಶ್ರದ್ಧೆ, ಭಕ್ತಿ ಜೊತೆಗೆ ಸಡಗರ ಸಂಭ್ರಮದಿಂದ ನೆರವೇರಿತು. ಇಲ್ಲಿನ ದೇವಸ್ಥಾನದಲ್ಲಿ ಬೆಳಗಿನ ಜಾವದಲ್ಲಿ ಪ್ರತಿಷ್ಠಾಂಗ ಹೋಮ, ಪ್ರತಿಷ್ಠಾಪನೆ ನ್ಯಾಸ ಹೋಮಗಳ ಪೂರ್ಣಾವತಿ, ಕಳಶಾಬೀಕ್ಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋತ್ರವಾಗಿ ನಡೆದವು. ನಂತರ ಇಲ್ಲಿ ಭಕ್ತರಿಗೆ ಅನ್ನಸಂತಾರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ವಿ.ಜನಾರ್ಧನ, ವುಳ್ಳಿ ವೆಂಕಟೇಶ, ಕೆ.ನಾಗರಾಜ, ವಿ.ನಾಗರಾಜ, ಡಿ.ವಿ.ಮಂಜುನಾಥ ಸೇರಿದಂತೆ ಶ್ರೀಧರ್ಮಶಾಸ್ತಾç ಅಯ್ಯಪ್ಪ ಸೇವಾ ಸಮಿತಿ ಸದಸ್ಯರು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆ ದೇವಸ್ಥಾನದಲ್ಲಿ ಫೆ.4ರಂದು ಬೆಳಿಗ್ಗೆ ಪುಣ್ಯಾವಾಚನ, ದೀಪ ಸ್ಥಾಪನೆ, ಅಂಗುರಾರ್ಪಣೆ, ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಸಂಜೆ ಶ್ರೀರಕ್ಷೆ ಯಜ್ಞ ಹೋಮ, ಧಾನ್ಯಾಧಿ ಬಾಸ ಹೋಮ, ಮಹಾಮಂಗಳಾರತಿ, ಫೆ.5ರಂದು ಬೆಳಿಗ್ಗೆ ಕಳಸ ದೇವತಾ ಹೋಮ, ಜಲಾದಿವಾಸ ಮಹಾಮಂಗಳಾರತಿ, ಸಂಜೆ ವಾಸ್ತು ಹೋಮ, ಸುದರ್ಶನ ಹೋಮ, ಪುಷ್ಪಾದಿವಾಸ, ಶಯಾದಿವಾಸ, ಮಹಾಸ್ಥಾಪನೆ ಮಂಗಳಾರತಿ. ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *