ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ಸಭೆಗಳಿಗೆ ಎಸ್ಪಿ, ಡಿವೈಎಸ್ಪಿ ಕಡ್ಡಾಯ ಹಾಜರಾತಿಗೆ ಎಡಿಜಿಪಿ ಆದೇಶ…


ಬೆಂಗಳೂರು : ರಾಜ್ಯದಲ್ಲಿನ ಅನುಸೂಚಿತ ಜಾತಿ, ಅನುಸೂಚಿತ ಬುಡುಕಟ್ಟುಗಳ ಸಮುದಾಯದವರ ಮೇಲಾಗುವ ದೌರ್ಜನ್ಯ, ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆಯಂತಹ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಮೇಲ್ವಿಚಾರಣೆಗೆ ರಚಿಸಿರುವ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಗಳಿಗೆ ಆಯಾ ಜಿಲ್ಲಾ ಎಸ್ಪಿ, ಆಯಾ ವಿಭಾಗದ ಡಿವೈಎಸ್ಪಿ ಕಡ್ಡಾಯವಾಗಿ ಹಾಜರಾಗದೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದ ನಿಮಿತ್ಯ ಸಮಿತಿ ಸಭೆಗಳಿಗೆ ಅಧಿಕಾರಿಗಳು ಕಡ್ಡಾಯ ಹಾಜರಾಗಲು ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಪತ್ರ ಬರೆದ ನಿಮಿತ್ಯ ಸದರಿ ಜಾಗೃತಿ ಸಮಿತಿ ಸಭೆಗಳಿಗೆ ಕಡ್ಡಾಯ ಹಾಜರಾಗುವಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರರವರು ಆದೇಶ ಹೊರಡಿಸಿದ್ದಾರೆ,ಕೋಟ್ # -ಮೋಹನ್ ಕುಮಾರ್ ದಾನಪ್ಪಸದಸ್ಯರುಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ .
ವರದಿ : ಜಿಲಾನಸಾಬ್ ಬಡಿಗೇರ್
