ಅಪ್ಪು ನಾಲ್ಕನೇ ವರ್ಷದ ಪುಣ್ಯ ಸ್ಮರಣೆ…… ಗೆಳೆಯರಬಳಗ ನೇತೃತ್ವದಲ್ಲಿ ಅಪ್ಪು ಗೀತನ ಮನ.

ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ ಉಪ್ಪಾರ್ ಓ ಣಿ ಯ ಗೆಳೆಯರ ಬಳಗ ಹಾಗೂ ಅಪ್ಪು ಅಭಿಮಾನಿಗಳಿಂದ ಬುಧವಾರದಂದು ಡಾಕ್ಟರ್ ಪುನೀತ್ ಕುಮಾರ್ ಅವರ ನಾಲ್ಕನೆಯ ಪುಣ್ಯ ಸ್ಮರಣೆ ಪ್ರಯುಕ್ತ ಅಪ್ಪು ಗೀತನ ಮನ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ವಿಐಪಿ ಮೆಲೋಡಿಸ್ ಅವರಿಂದ ಅಪ್ಪು ಚಲನಚಿತ್ರದ ಹಾಡುಗಳು ಮುಖ್ಯಸ್ಥ ಪಂಪಾಪತಿ ಇಂಗಳಗಿ ಹಾಗೂ ಸಂಗಡಿಗರು ಗೀತದ ಮೂಲಕ ವಿಶೇಷ ಗಮನ ಸೆಳೆದರು. ಅಪ್ಪು ಭಾವಚಿತ್ರಕ್ಕೆ ಪೂಜಿಸಲ್ಲಿಸಿದ ಇಂಗಳಗಿ ಸಹೋದರರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಜೊತೆಗಿರದ ಜೀವ ಎಂದೆಂದೂ ಜೀವಂತ ಎಂಬ ಮಾತಿನಂತೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಅವರ ಬಾಲ್ಯದಿಂದ ಚಿತ್ರರಂಗ ಪ್ರವೇಶ ಆಗುವ ಅವರ ನಟಿಸಿದ ಚಿತ್ರಗಳನ್ನು ಕುರಿತು ಅತ್ಯಂತಮಾ ರ್ಮಿಕವಾಗಿ ಮಾತನಾಡಿದರು… ಈ ಸಂದರ್ಭದಲ್ಲಿ ವಾರ್ಡಿನ ಗಣ್ಯರು. ಅಪ್ಪು ಅಭಿಮಾನಿಗಳು. ಯುವಕರು. ಮಹಿಳೆಯರು ಪಾಲ್ಗೊಂಡಿದ್ದರು.
