ಶ್ರೀ ಕರ್ನೂಲ್ ಸಾಹೇಬ್ ತಾತನವರ ದರ್ಗಾ ದಿಂದ ಕಾಯಕಯೋಗಿ ಶ್ರೀ ಚನ್ನಬಸವ ಸ್ವಾಮಿ ಮಹಾರಥೋತ್ಸವಕ್ಕೆ ಬೃಹತ್ ಹೂವಿನ ಹಾರ ಸಮರ್ಪಣೆ,,,,

ಗಂಗಾವತಿಯ ಆರಾಧ್ಯ ದೈವ ಕಾಯಕಯೋಗಿ ಹಾಗೂ ದಾಸೋಹ ಮೂರ್ತಿ ಶ್ರೀ ಚನ್ನಬಸವ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕರ್ನೂಲ್ ಸಾಹೇಬ್ ತಾತನವರ ದರ್ಗಾ ಕಮಿಟಿಯಿಂದ ಮಹಾ ರಥೋತ್ಸವಕ್ಕೆ ಬೃಹತ್ ಹೂವಿನ ಹಾರವನ್ನು ಸಮರ್ಪಿಸಲಾಯಿತು

ಭಾವೈಕ್ಯತೆಯ ಶ್ರೀ ಕರ್ನೂಲ್ ಸಾಹೇಬ್ ತಾತನವರ ದರ್ಗಾದಿಂದ ಪ್ರಾರಂಭವಾದ ಬೃಹತ್ ಹೂವಿನ ಹಾರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಚನ್ನಬಸವ ತಾತನವರ ದೇವಸ್ಥಾನವನ್ನು ತಲುಪಿದ ನಂತರ ಮಹಾರಥೋತ್ಸವಕ್ಕೆ ಹೂವಿನ ಹಾರವನ್ನು ಭಕ್ತಿಯಿಂದ ಸಮರ್ಪಿಸಲಾಯಿತು ಶ್ರೀ ಕರ್ನೂಲ್ ಸಾಹೇಬ್ ತಾತನವರ ದರ್ಗಾ ಪೀಠಾಧೀಶರಾದ ಸೈಯದ್ ಬಾಷಾ ಸಾಬ್ ಪ್ರಮುಖ ರಾಗಿರುವ ಸೈಯದ್ ಅಲಿ ಅವರು ನಗರಸಭೆಯ ಸದಸ್ಯರಾಗಿರುವ ಮಹಮ್ಮದ್ ಉಸ್ಮಾನ್ ಸಾಬ್ ಬಿಚ್ಗತ್ತಿ,, ಮಹಮ್ಮದ್ ಆಯುಬ್ ಖಾನ್ ಸಾಧಿಕ್ ಕಾರ್ಪೆಂಟರ್,,, ಜಿನ್ನಾ ಸಾಬ್ ಮನಿಯರ್ ಹಟೆಲಿ ಭಾಷಾ ಅನ್ನು ಮನಿಯರ್ ಜಾಕಿರ್ ಶಬ್ಬೀರ್ ಭರಣಿ ಹಾಗೂ ನಾಜಿಮ್ ಅವರುಗಳು ಹೂವಿನ ಹಾರ ಸಮರ್ಪಣೆಯಲ್ಲಿ ಪಾಲ್ಗೊಂಡಿದ್ದರು.

